ಒಣಗಿದ ನನ್ನವ್ವನ ಎದೆಯಿಂದ
ಝಲ್ಲೆಂಬ ಜೀವರಸ ಬತ್ತಿ
ಎಂದಿಗೂ ಬಾಯಿ ತುಂಬಾ ಗುಟುಕು
ಎಟುಕಲಿಲ್ಲ ನನ್ನ ಬಾಯಿಗೆ.
ಏಕೆಂದರೆ ನನ್ನಪ್ಪನ ಕಷ್ಟಗಳು
ಅವಳಿಗೆ ಹೊಟ್ಟೆ ತುಂಬಿಸಲಿಲ್ಲ.
ಬಡತನದ ಬೇಗೆಯಿಂದ ಬೇಸತ್ತು
ನನ್ನಪ್ಪ – ನನ್ನವ್ವನಿಗೆ ಅಡವಿಟ್ಟ ಒಂದು ದಿನ
ತಾಯಿ – ಕಂದನ ಬೇರೆ ಮಾಡಿದ್ದನು.
ನನ್ನವ್ವನಿಗೆ ಬಿಗಿದಿರುವ
ಗುಲಾಮಗಿರಿಯ ಸಂಕೋಲೆ
ಪ್ರಶ್ನೆ ಮಾಡಿದ್ದಕ್ಕೆ ನಾನು
ದೇಶದ್ರೋಹಿ ಎನಿಸಿಕೊಂಡೆ
ಈ ತಾಯಿ, ಮಾತೃಭೂಮಿ
ಸರಹದ್ದುಗಳಲ್ಲಿ ಸೈನಿಕರು
ತಾಯ್ ಸೆರೆಯ ಬಿಡಿಸಲು
ಪ್ರಾಣಗಳ ಬಲಿಗಳು
ಹೋರಾಟದ ಆರ್ಭಟದಲಿ
ಮಾರಾಟದ ಒಪ್ಪಂದಗಳನ್ನು
ಕುದುರಿಸಿದವರು ನೀವು
ಸಾಮ್ರಾಜ್ಯಶಾಹಿಗಳಿಗೆ ಕುರ್ಚಿ
ಆಸನಗಳ ಒದಗಿಸಿದ ಕುತಂತ್ರಿಗಳೇ
ಎಚ್ಚರ!
ನನ್ನವ್ವನ ಒಡಲ ಕಿಚ್ಚಿನಿಂದ
ಹೊರಬಿದ್ದ ಅವಳ ನಿಟ್ಟುಸಿರಿನಿಂದ
ನಿಮ್ಮ ಒಪ್ಪಂದಗಳು ಸದ್ದಿಲ್ಲದೆ
ಸುಟ್ಟು ಬೂದಿಯಾದಾವು.
ಹಸಿದ ಅವಳ ಕಂದಮ್ಮಗಳ
ಸಿಟ್ಟು ತಿರುಗಿ ಬಿದ್ದರೆ ನಿಮ್ಮ
ಒಪ್ಪಂದಗಳು ಹರಿದು ಚಿಂದಿಯಾದಾವು.
ನನ್ನ ಹಡೆದವ್ವನ ನೋವುಗಳು,
ಅವಳ ಕಣ್ಣೀರಿನಲಿ ತೋಯ್ದು,
ಶೃಂಖಲೆಯ ಗುಲಾಮಿ ಚರಿತ್ರೆಯನು
ಅಳಿಸಿ ಹಾಕಿ – ಹೊಸ ಚರಿತ್ರೆ
ರಚಿಸಿಯಾಳು ಅವಳ ರಕ್ತದಿಂದ.
*****
Related Post
ಸಣ್ಣ ಕತೆ
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಒಂಟಿ ತೆಪ್ಪ
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…